ವಿವೇಕಾನಂದ ಶಿಕ್ಷಣ ಮಹಾವಿದ್ಯಾಲಯದ ಪ್ರಶಿಕ್ಷಣಾರ್ಥಿಗಳು ವಿಶ್ವ ಪರಿಸರ ದಿನದ ಪ್ರಯುಕ್ತ ಪ್ರಧಾನಿ ಶ್ರೀ ನರೇಂದ್ರ ಮೋದಿ ಅವರು ಪರಿಚಯಿಸಿದ ‘ಏಕ್ ಪೇಡ್ ಮಾ ಕೇ ನಾಮ್’ ಅಭಿಯಾನದಲ್ಲಿ ತಮ್ಮ ಮನೆಗಳಲ್ಲಿ ವಿವಿಧ ಸಸ್ಯಗಳನ್ನು ನೆಡುವ ಮೂಲಕ ಭಾಗಿಯಾದರು
ವಿವೇಕಾನಂದ ಶಿಕ್ಷಣ ಮಹಾವಿದ್ಯಾಲಯ, ವಿವೇಕಾನಂದ ಕನ್ನಡ ಮಧ್ಯಮ ಶಾಲೆ, ವಿವೇಕಾನಂದ ಆಂಗ್ಲ ಮಧ್ಯಮ ಶಾಲೆ ಹಾಗೂ ನರೇಂದ್ರ ಪದವಿ ಪೂರ್ವ ಕಾಲೇಜು ಒಟ್ಟಾಗಿ ವಿವೇಕಾನಂದ ಆಂಗ್ಲ ಮಾಧ್ಯಮ ಶಾಲೆಯ ಸಭಾಂಗಣದಲ್ಲಿ ಕಾರ್ಗಿಲ್ ವಿಜಯೋತ್ಸವ- ಯೋಧ ನಮನ ಕಾರ್ಯಕ್ರಮ ಶನಿವಾರ (26-07-2024) ದಂದು ನಡೆಯಿತು
ವಿವೇಕಾನಂದ ಶಿಕ್ಷಣ ಮಹಾವಿದ್ಯಾಲಯದಲ್ಲಿ ಹಸಿರು ಪರಿಸರ ಕಲ್ಪನಾಧಾರಿತ ‘ಸಸ್ಯ ಸಂಜೀವಿನಿ – ಯೋಜನಾರಂಭ’ ಕಾರ್ಯಕ್ರಮ ದಿನಾಂಕ 15 .07.2024ರಂದು ತೆಂಕಿಲ ವಿವೇಕನಗರ ಆವರಣದಲ್ಲಿ ನಡೆಯಿತು.
20ರ ಸಂಭ್ರಮ ಸರಣಿ ಉಪನ್ಯಾಸ ಮಾಲಿಕೆಯ 4ನೇ ಸಂಚಿಕೆ ರಾಮಾಯಣದ ಪಾತ್ರಗಳ ಅಂತರಂಗ ನಿರೂಪಣೆ-7 ‘ವಾಲಿಯ ಅಂತರಂಗ’ ದಿವಂಗತ ಪಾದೆಕಲ್ಲು ನಾರಾಯಣ ಭಟ್ಟ ಇವರ ಜನ್ಮ ಶತಮಾನ ಸಂಸ್ಮರಣೆ ಅಂಗವಾಗಿ ದಿನಾಂಕ 13.07.2024 ರಂದು ನಡೆಯಿತು. ಕಾರ್ಯಕ್ರಮವನ್ನು ವಿವೇಕಾನಂದ ವಿದ್ಯಾವರ್ಧಕ ಸಂಘದ ಕಾರ್ಯದರ್ಶಿ ಡಾ. ಕೆ.ಎಂ ಕೃಷ್ಣ ಭಟ್ ಉದ್ಘಾಟಿಸಿದರು.ವೇದಿಕೆಯಲ್ಲಿ ಡಾ| ಪ್ರಭಾಕರ ಜೋಶಿ,ಶ್ರೀಮತಿ ಗಂಗಮ್ಮ ಹೆಚ್ ಶಾಸ್ತ್ರಿ, ಶ್ರೀ ಗಣರಾಜ ಕುಂಬ್ಳೆ, ಕಾಲೇಜಿನ ಪ್ರಾಂಶುಪಾಲರಾದ ಡಾ|ಶೋಭಿತಾ ಸತೀಶ್ ಉಪಸ್ಥಿತರಿದ್ದರು.
ದಿನಾಂಕ 12.07.2024 ರಂದು ಶಿಕ್ಷಣದಲ್ಲಿ ನಾಟಕ ಮತ್ತು ಕಲೆ ಹಾಗೂ ‘ಗತಿ’ ಕಿರುಚಿತ್ರ ಬಿಡುಗಡೆ ಕಾರ್ಯಕ್ರಮ ನಡೆಯಿತು. ಹಿರಿಯ ರಂಗಭೂಮಿ ಕಲಾವಿದ ಹಾಗೂ ಚಲನಚಿತ್ರ ನಿರ್ದೇಶಕರಾದ ಶ್ರೀ ವಿಜಯಕುಮಾರ್ ಕೊಡಿಯಾಲ್ ಬೈಲ್ ಅವರು ಕಾರ್ಯಕ್ರಮವನ್ನು ಉದ್ಘಾಟಿಸಿ, ಕಾಲೇಜಿನ ಪ್ರಶಿಕ್ಷಣಾರ್ಥಿಗಳೇ ರಚಿಸಿ, ನಿರ್ದೇಶಿಸಿದ ‘ಗತಿ’ ಎಂಬ ಕಿರುಚಿತ್ರವನ್ನು ಬಿಡುಗಡೆಗೊಳಿಸಿದರು.ವೇದಿಕೆಯಲ್ಲಿ ಮುಖ್ಯ ಅತಿಥಿಗಳಾದ ಸುದ್ದಿ ಬಿಡುಗಡೆಯ ಸಿಇಓ ಸೃಜನ್ ಊರುಬೈಲು, ಧರ್ಮದೈವ ಚಿತ್ರದ ನಿರ್ದೇಶಕರಾದ ಶ್ರೀ ನಿತಿನ್ ರೈ, ನಟ ಶ್ರೀ ಚೇತನ್ ರೈ ಮಾಣಿ, ಕಾಲೇಜಿನ ಪ್ರಾಂಶುಪಾಲರಾದ ಡಾ|ಶೋಭಿತ […]
ದಿನಾಂಕ: 26/06/2024 ರಂದು ನಡೆಯಿತು. ಕಾರ್ಯಕ್ರಮಕ್ಕೆ ಸಂಪನ್ಮೂಲ ವ್ಯಕ್ತಿಯಾಗಿ ಆಗಮಿಸಿದ, ವಿವೇಕಾನಂದ ಕಾನೂನು ಮಹಾವಿದ್ಯಾಲಯದ ಸಹಾಯಕ ಪ್ರಾದ್ಯಾಪಕರಾದ ಶ್ರೀಮತಿ ಸಂಗೀತ ಎಸ್ ಎಂ ಮಾತನಾಡಿ, ರ್ಯಾಗಿಂಗ್ ಎಂಬುದು ಯುರೋಪಿನಿಂದ ಭಾರತಕ್ಕೆ ಬಂದಿದ್ದು, ಇದು ಭಾರತದಲ್ಲಿ ಹುಟ್ಟಿದ್ದಲ್ಲ. 2001ರಲ್ಲಿ ಜಾದವಪುರ ಕಾಲೇಜಿನಲ್ಲಿ ನಡೆದ ರ್ಯಾಗಿಂಗ್ ನಲ್ಲಿ ವಿದ್ಯಾರ್ಥಿಯೊಬ್ಬ ಆತ್ಮಹತ್ಯೆಗೈದಿದ್ದು, ಈ ಕೇಸ್ ನ ಅಡಿಯಲ್ಲಿ ಸುಪ್ರೀಂ ಕೋರ್ಟ್ ಯುಜಿಸಿ ಎಂಬ ಕಾಯಿದೆಯಲ್ಲಿ ಹೇಗೆ ರ್ಯಾಗಿಂಗ್ ಅನ್ನು ನಿಯಂತ್ರಣಕ್ಕೆ ತರಬಹುದು ಎಂಬ ನಿಯಮವನ್ನು ಹೊರತಂದಿತು. ವಿದ್ಯಾರ್ಥಿಗಳು ಎದೆಗುಂದದೆ ಮಾನಸಿಕವಾಗಿ ಗಟ್ಟಿಯಾಗಿದ್ದರೆ […]
ಭಾರತ ಸ್ಕೌಟ್ಸ್ ಮತ್ತು ಗೈಡ್ಸ್ ನ ಆರಂಭಿಕ ತರಬೇತಿ ಕಾರ್ಯಕ್ರಮ ಗುರುವಾರ (26-06-2024) ದಂದು ನಡೆಯಿತು.ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಯಾಗಿ ಆಗಮಿಸಿದ ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಲೋಕಲ್ ಅಸೋಸಿಯೇಷನ್ ಕಾರ್ಯದರ್ಶಿ ಶ್ರೀಮತಿ ವಿದ್ಯಾ ಆರ್ ಗೌರಿ ಮಾತನಾಡಿ, ವಿದ್ಯಾರ್ಥಿಗಳಲ್ಲಿ ದೇಶಪ್ರೇಮವನ್ನು ಬೆಳೆಸಲು ಸ್ಥಾಪಿಸಿದ ಸಂಸ್ಥೆಯೇ ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್. ಇದು ಶಿಕ್ಷಣ ವ್ಯವಸ್ಥೆಗೆ ಪೂರಕವಾಗಿರುವ ಚಟುವಟಿಕೆಯಾಗಿದೆ. ಮಕ್ಕಳ ಸರ್ವಾಂಗೀಣ ಬೆಳವಣಿಗೆ ಹಾಗೂ ಪ್ರಬುದ್ಧತೆಯನ್ನು ಬೆಳೆಸಲು ಸ್ಕೌಟ್ಸ್ ಮತ್ತು ಗೈಡ್ಸ್ ನೆರವಾಗುತ್ತದೆ. ವಿದ್ಯಾರ್ಥಿಗಳಲ್ಲಿ ಸೇವಾ ಮನೋಭಾವವನ್ನು […]
ದಿನಾಂಕ 28.06.2024 ನೇ ಶುಕ್ರವಾರ ಕ್ರಾಫ್ಟ್ ತರಬೇತಿ ನಡೆಯಿತು.ಈ ತರಬೇತಿಗೆ ಶ್ರೀಮತಿ ರೋಹಿಣಿ ರಾಘವ ಆಚಾರ್ಯ ತರಬೇತುದಾರರಾಗಿ ಆಗಮಿಸಿ ದ್ವಿತೀಯ ವರ್ಷದ ಪ್ರಶಿಕ್ಷಣಾರ್ಥಿಗಳಿಗೆ ಕ್ರಾಫ್ಟ್ ತರಬೇತಿ ನೀಡಿದರು. ಸಹಾಯಕ ಪ್ರಾದ್ಯಾಪಕರಾದ ಶ್ರೀಮತಿ ರಾಜೀವಿ ಬಿ. ಕಾರ್ಯಕ್ರಮವನ್ನು ಸಂಯೋಜಿಸಿದರು.