ಸಂವಿಧಾನವನ್ನು ಗೌರವಿಸಬೇಕು : ಶ್ರೀ ಶ್ಯಾಮ್ ಪ್ರಸಾದ್
Friday, November 26th, 2021ಪುತ್ತೂರು : ದಿನಾಂಕ 26/11/21 ರಂದು ವಿವೇಕಾನಂದ ಬಿ. ಎಡ್. ಕಾಲೇಜಿನಲ್ಲಿ ಭಾರತದ ಸಂವಿಧಾನ ದಿನಾಚರಣೆಯ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಯಿತು. ಈ ಕಾರ್ಯಕ್ರಮದಲ್ಲಿ ನ್ಯಾಯವಾದಿ ಶ್ರೀ ಶ್ಯಾಮ ಪ್ರಸಾದ್ ಕೈಲಾರ್ ಇವರು ಮುಖ್ಯ ಅತಿಥಿಗಳಾಗಿ ಭಾಗವಹಿಸಿ, ಸಂವಿಧಾನದ ಹಕ್ಕುಗಳ ಬಗ್ಗೆ ಮಾತ್ರವಲ್ಲದೆ ಸಂವಿಧಾನದಲ್ಲಿರುವ ಕರ್ತವ್ಯಗಳ ಬಗ್ಗೆ ಅರಿವಿರಬೇಕು. ಸಂವಿಧಾನವು ಜನರಿಗೆ ರಕ್ಷಣೆಯನ್ನು ನೀಡುತ್ತದೆ. ಹಾಗೆಯೇ ನಾವು ಸಂವಿಧಾನವನ್ನು ದುರುಪಯೋಗಪಡಿಸಬಾರದು. ತಂತ್ರಜ್ಞಾನವನ್ನು ಬಳಸುವುದರಲ್ಲಿಯೂ ಜಾಗರೂಕರಾಗಿರಬೇಕು ಎಂದು ಹೇಳಿದರು. ಈ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ ಸಂಸ್ಥೆಯ ಪ್ರಾಂಶುಪಾಲರಾದ ಡಾ ಶೋಭಿತಾ ಸತೀಶ್ […]