ವಿವೇಕಾನಂದ ಬಿ. ಎಡ್. ದ್ವಿತೀಯ ವರ್ಷದ ಪ್ರ ಶಿಕ್ಷಣಾರ್ಥಿಗಳಿಗೆ ದೀಪ ಪ್ರದಾನ ಕಾರ್ಯಕ್ರಮವನ್ನು ಆಯೋಜಿಸಲಾಯಿತು. ಈ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಡಾ.ಸುಂದರ ಕೇನಾಜೆ ವಿಶೇಷ ಕರ್ತವ್ಯಾಧಿಕಾರಿಗಳು ಬಾಲವನ ಪುತ್ತೂರು ಭಾಗವಹಿಸಿದ್ದರು. ಈ ಕಾರ್ಯಕ್ರಮದ ಅಧ್ಯಕ್ಷ ಸ್ಥಾನವನ್ನು ಸಂಸ್ಥೆಯ ಆಡಳಿತ ಮಂಡಳಿಯ ಅಧ್ಯಕ್ಷರಾದ ಪ್ರೊ. ಎ. ವಿ ನಾರಾಯಣ ವಹಿಸಿಕೊಂಡಿದ್ದರು. ಅದೇ ರೀತಿ ಸಂಸ್ಥೆಯ ಆಡಳಿತ ಮಂಡಳಿಯ ಖಜಾಂಚಿ ಯಾದ ರಾಮಪ್ರಸಾದ್ ಕರಿಯಾಲ ಹಾಗೂ ಪ್ರಾಂಶುಪಾಲರಾದ ಡಾ. ಶೋಭಿತಾ ಸತೀಶ್ ರವರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.
ದಿನಾಂಕ : 8-9-2021 ರಂದು ಕಾಲೇಜಿನಲ್ಲಿ ಶಿಕ್ಷಕರ ದಿನಾಚರಣೆಯನ್ನು ಆಚರಿಸಲಾಯಿತು. ಶ್ರೀ ರಮೇಶ್ ಶಿಕ್ಷಕರು ಜಿ ಎಲ್ ಪಿ ಸ್ಕೂಲ್ ಗಂಟಕನದೊಡ್ದಿ ಕನಕಪುರ ತಾಲೂಕು ಹಾಗೂ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷರು ರಾಮ ನಗರ ಜಿಲ್ಲೆ ಇವರು ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಪ್ರಾಂಶುಪಾಲರಾದ ಡಾ. ಶೋಬಿತಾ ಎಂ. ಕೆ. ವಹಿಸಿದ್ದರು.
ಕಲೆ ಅನ್ನೋದು ಒಂದು ಸಮುದ್ರದ ಹಾಗೆ, ಅದರಲ್ಲಿ ಒಂದು ಹನಿಯಷ್ಟು ಮಾತ್ರ ನಾನು ಕಲಿತಿರೋದು: ವಿಘ್ನಶ್ ಭಾವನಾ ಕಲಾ ಆರ್ಟ್ಸ್ -ಪುತ್ತೂರು. ಪುತ್ತೂರು : ದಿನಾಂಕ 18/8/2021ರಂದು ವಿವೇಕಾನಂದ ಶಿಕ್ಷಣ ಮಹಾವಿದ್ಯಾಲಯ, ತೆಂಕಿಲದಲ್ಲಿ ನಾಟಕದಲ್ಲಿ ಪ್ರಸಾದನದ ಪಾತ್ರ ಎಂಬ ಕಾರ್ಯಾಗಾರವನ್ನು ದ್ವಿತೀಯ ವರ್ಷದ ಪ್ರಶಿಕ್ಷಣಾರ್ಥಿಗಳಿಗಾಗಿ ಹಮ್ಮಿ ಕೊಳ್ಳಲಾಗಿತ್ತು. ಈ ಕಾರ್ಯಗಾರದ ಮುಖ್ಯ ಅಭ್ಯಾಗತರಾಗಿ ಶ್ರೀ ವಿಘ್ನಶ್ ಭಾವನಾ ಕಲಾ ಆರ್ಟ್ಸ್ -ಪುತ್ತೂರು ಪಾಲ್ಗೊಂಡಿದ್ದರು. ನಾಟಕದಲ್ಲಿ ಪ್ರಸಾದನದ ಪಾತ್ರವನ್ನು ಬಹಳ ಸೊಗಸಾಗಿ ಮನೋಜ್ಞವಾಗಿ ತಿಳಿಸಿದರು. ಈ ಕಾರ್ಯಗಾರದ ಅಧ್ಯಕ್ಷತೆಯನ್ನು […]
ದಿನಾಂಕ: 15-08-2021 ರಂದು ವಿವೇಕಾನಂದ ವಿದ್ಯಾ ಸಂಸ್ಥೆಗಳ ಆಶ್ರಯದಲ್ಲಿ ಸ್ವಾತಂತ್ರ್ಯೋತ್ಸವದ ಸುವರ್ಣ ಮಹೋತ್ಸವವನ್ನು ಆಚರಿಸಲಾಯಿತು.
ದಿನಾಂಕ : 31-07-2021 ರಂದು ಆನ್ಲೈನ್ ಮುಖಾಂತರ ANTI – RAGGING ಅರಿವು ಕಾರ್ಯಕ್ರಮ ನಡೆಯಿತು. ಶ್ರೀ ಸಂತೋಷ್ ಶೆಟ್ಟಿ ಸಹಾಯಕ ಪ್ರಾಧ್ಯಾಪಕರು ಶ್ರೀ ಧವಳ ಕಾಲೇಜು ಮೂಡಬಿದ್ರೆ ಇವರು ರಾಗಿಂಗ್ ವಿಷಯದ ಕುರಿತು ಭಾವಿ ಶಿಕ್ಷಕರಿಗೆ ಅರಿವನ್ನು ಮೂಡಿಸಿದರು. ಕಾರ್ಯಕ್ರಮವನ್ನು ಕಾಲೇಜಿನ ಸಹಾಯಕ ಪ್ರಾಧ್ಯಾಪಕರಾದ ಶ್ರೀಮತಿ ರಾಜೀವಿ ಸಂಯೋಜಿಸಿದ್ದರು.
ದಿನಾಂಕ : 30-07-2021 ರಂದು ಪ್ರಥಮ ವರ್ಷದ ಬಿ.ಎಡ್ ವಿದ್ಯಾರ್ಥಿ ಶಿಕ್ಷಕರಿಗೆ ಸ್ವಾಗತ ಕಾರ್ಯಕ್ರಮವನ್ನು ಆಯೋಜಿಸಲಾಯಿತು. ಪುತ್ತೂರು ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ಶ್ರೀ ಲೋಕೇಶ್ ಸಿ ಇವರು ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಆಡಳಿತ ಮಂಡಳಿಯ ಅಧ್ಯಕ್ಷರಾದ ಶ್ರೀ ಎ ವಿ ನಾರಾಯಣ ವಹಿಸಿದ್ದರು.
ಶಿಕ್ಷಕ ವೃತ್ತಿಗಿಂತ ಶ್ರೇಷ್ಠವಾದ ವೃತ್ತಿ ಬೇರೊಂದಿಲ್ಲ: – ಗಂಗಮ್ಮ ಮಣಿಲ ಶ್ರೀದೇವಿ ಪ್ರೌಢ ಶಾಲೆ ನಿವೃತ್ತ ಶಿಕ್ಷಕಿ ಪುತ್ತೂರು : ದಿನಾಂಕ 28/07/2021ರಂದು ವಿವೇಕಾನಂದ ಶಿಕ್ಷಣ ಮಹಾವಿದ್ಯಾಲಯ, ತೆಂಕಿಲದಲ್ಲಿ ಗುರುಪೂಜಾ ಕಾರ್ಯಕ್ರಮವನ್ನು ಆಚರಿಸಲಾಯಿತು. ಈ ಕಾರ್ಯಕ್ರಮದ ಮುಖ್ಯ ಅಭ್ಯಾಗತರಾಗಿ ಶ್ರೀಮತಿ ಗಂಗಮ್ಮ ಮಣಿಲ, ಶ್ರೀದೇವಿ ಪ್ರೌಢಶಾಲೆಯ ನಿವೃತ್ತ ಶಿಕ್ಷಕಿ ಮತ್ತು ಸಹಸಂಚಾಲಕಿ ಪಾಲ್ಗೊಂಡಿದ್ದರು. ಗುರುಪೂಜೆಯ ಹಿನ್ನಲೆ ಮತ್ತು ಯಾಕೆ ಆಚರಿಸಬೇಕು ಎಂದು ಮನೋಜ್ಞವಾಗಿ ತಿಳಿಸಿದರು. ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶ್ರೀರಾಮ್ ಪ್ರಸಾದ್ ಕರಿಯಲಾ ರವರು ವಹಿಸಿಕೊಂಡಿದ್ದರು. ಕಾಲೇಜಿನ […]
ದಿನಾಂಕ : 26/07/2021ರಂದು ನಮ್ಮ ಕಾಲೇಜಿನಲ್ಲಿ ಐತಿಹಾಸಿಕ ಕಾರ್ಗಿಲ್ ವಿಜಯೋತ್ಸವ ದಿನಾಚರಣೆಯನ್ನು ಆಚರಿಸಲಾಯಿತು.ಈ ಕಾರ್ಯಕ್ರಮವನ್ನು ಗೂಗಲ್ ಮೀಟ್ ಮೂಲಕ ಮಾಡಲಾಯಿತು. ಈ ಕಾರ್ಯಕ್ರಮದ ಮುಖ್ಯ ಅಭ್ಯಾಗತರಾಗಿ ವಿಶ್ವವಿದ್ಯಾನಿಲಯ ಕಾಲೇಜು ಮಂಗಳೂರಿನ ಡಾ. ಸುರೇಶ್ ಸಹಾಯಕ ಪ್ರಾಧ್ಯಪಕರು ಅರ್ಥಶಾಸ್ತ್ರ ವಿಭಾಗ ಪಾಲ್ಗೊಂಡಿದ್ದರು. ಮುಖ್ಯ ಅಭ್ಯಾಗತರಾಗಿ ಕಾರ್ಗಿಲ್ ಯುದ್ಧದ ಹಿನ್ನಲೆ ಹಾಗೂ ನಾವು ಕಾರ್ಗಿಲ್ ದಿನಾಚರಣೆಯನ್ನು ಯಾಕೆ ಆಚರಿಸಬೇಕು ಎಂದು ಮನೋಜ್ಞವಾಗಿ ತಿಳಿಸಿದರು. ಭಾರತೀಯ ಯೋಧರ ತ್ಯಾಗ, ಬಲಿದಾನಗಳನ್ನು ಮನ ಮುಟ್ಟುವಂತೆ ಹೇಳಿದರು. ಭಾರತೀಯ ಯೋಧರು ಎಂದಿಗೂ ಕೆಚ್ಚೆದೆಯ ವೀರರು […]
ದಿನಾಂಕ : 2-7-2021 ರಂದು ವಿವೇಕಾನಂದ ಪಾಲಿಟೆಕ್ನಿಕ್, ವಿವೇಕಾನಂದ ಬಿ.ಎಡ್ ಕಾಲೇಜು ಮತ್ತು ಆರೋಗ್ಯ ಇಲಾಖೆ ಪುತ್ತೂರು ಇದರ ಆಶ್ರಯದಲ್ಲಿ ವಿದ್ಯಾರ್ಥಿಗಳಿಗೆ ಉಚಿತ ಕೋವಿಡ್ ಲಸಿಕಾ ಶಿಬಿರವನ್ನು ಆಯೋಜಿಸಲಾಯಿತು.