ಆಟಿಡೊಂಜಿ ದಿನ ಕಾರ್ಯಕ್ರಮ

ಆಟಿಡೊಂಜಿ ದಿನ ಕಾರ್ಯಕ್ರಮ

Wednesday, September 10th, 2025

ವಿವೇಕಾನಂದ ಶಿಕ್ಷಣ ಮಹಾವಿದ್ಯಾಲಯದಲ್ಲಿ  ಜುಲೈ 23ರಂದು ಆಟಿಡೊಂಜಿ ದಿನವನ್ನು ತುಳುನಾಡಿನ ಸಂಸ್ಕೃತಿ ಬಿಂಬಿಸುವ ಜನಪದ ಹಾಡುಗಳು, ನೃತ್ಯಗಳು ಮತ್ತು ನಾಟಕಗಳ ಮೂಲಕ ಪ್ರಶಿಕ್ಷಣಾರ್ಥಿಗಳು ಪ್ರಸ್ತುತಪಡಿಸಿದರು. ಕಾರ್ಯಕ್ರಮದಲ್ಲಿ ಪ್ರಾಂಶುಪಾಲೆ ಡಾ.ಶೋಭಿತ ಸತೀಶ್, ಸಹಾಯಕ ಪ್ರಾಧ್ಯಾಪಕರು ಮತ್ತು ಪ್ರಶಿಕ್ಷಣಾರ್ಥಿಗಳು ಭಾಗವಹಿಸಿದರು. ಪ್ರಶಿಕ್ಷಣಾರ್ಥಿಗಳಾದ ಜಯಶ್ರೀ ಮತ್ತು ಹರ್ಷಿತ ಪ್ರಾರ್ಥಿಸಿ, ಧನ್ಯಶ್ರೀ ಮತ್ತು ಶಾರದ ಆಟಿ ತಿಂಗಳ ಮಹತ್ವದ ಕುರಿತು ಮಾತನಾಡಿದರು. ಚೈತನ್ಯ ನಿರೂಪಿಸಿದರು.

"Breaking the Silence- Law, Protection and Awareness"- ಮಾಹಿತಿ ಕಾರ್ಯಕ್ರಮ

“Breaking the Silence- Law, Protection and Awareness”- ಮಾಹಿತಿ ಕಾರ್ಯಕ್ರಮ

Wednesday, September 10th, 2025

ವಿವೇಕಾನಂದ ಶಿಕ್ಷಣ ಮಹಾವಿದ್ಯಾಲಯ ಹಾಗೂ ಇನ್ನರ್ ವೀಲ್ ಕ್ಲಬ್ ಆಫ್ ಪುತ್ತೂರು ಒಟ್ಟಾಗಿ ವಿವೇಕಾನಂದ ಶಿಕ್ಷಣ ಮಹಾವಿದ್ಯಾಲದಲ್ಲಿ Anti- Women Sexual Harassment Cell ಮತ್ತು Grievance Redressal Cell ಗಳ ಅಡಿಯಲ್ಲಿ ಆಯೋಜಿಸಿದ “Breaking the Silence- Law, Protection and Awareness” ಮಾಹಿತಿ ಕಾರ್ಯಕ್ರಮ ಜುಲೈ 21 ರಂದು ನಡೆಯಿತು. ಸಂಪನ್ಮೂಲ ವ್ಯಕ್ತಿ ಪುತ್ತೂರಿನ ವಕೀಲರಾದ ಶ್ರೀಮತಿ ಸೀಮ ನಾಗರಾಜ್ ರವರು ಮಾತನಾಡಿ, ಪ್ರಸ್ತುತ ಸಮಾಜದಲ್ಲಿ ವಿಚ್ಛೇದನ ಸಮಸ್ಯೆಗಳು ಹಾಗೂ ಲೈಂಗಿಕ ಕಿರುಕುಳ ಪ್ರಕರಣಗಳು […]

ಗಣೇಶೋತ್ಸವ- 2025 ರ ಅಂಗವಾಗಿ ಪ್ರಶಿಕ್ಷಣಾರ್ಥಿಗಳಿಗೆ ಸ್ಪರ್ಧೆಗಳು

ಗಣೇಶೋತ್ಸವ- 2025 ರ ಅಂಗವಾಗಿ ಪ್ರಶಿಕ್ಷಣಾರ್ಥಿಗಳಿಗೆ ಸ್ಪರ್ಧೆಗಳು

Wednesday, September 10th, 2025

ವಿವೇಕಾನಂದ ಶಿಕ್ಷಣ ಮಹಾವಿದ್ಯಾಲಯದಲ್ಲಿ ವಿವೇಕಾನಂದ ವಿದ್ಯಾವರ್ಧಕ ಸಂಘದಿಂದ ಆಚರಿಸುತ್ತಿರುವ ಗಣೇಶೋತ್ಸವ- 2025 ರ ಅಂಗವಾಗಿ ಜುಲೈ 23ರಂದು ಭಾಷಣ, ಚಿತ್ರಕಲೆ ,ಮತ್ತು ರಂಗೋಲಿ ಸ್ಪರ್ಧೆಗಳನ್ನು ಪ್ರಶಿಕ್ಷಣಾರ್ಥಿಗಳಿಗೆ ಏರ್ಪಡಿಸಲಾಯಿತು

ಆನಂದೋತ್ಸವ ಶಿಬಿರ- ವಿದ್ಯಾರ್ಥಿ ಶಿಕ್ಷಕ ವಿಶೇಷ ಯೋಗ ಸರ್ಟಿಫಿಕೇಟ್‌ ಕೋರ್ಸ್

ಆನಂದೋತ್ಸವ ಶಿಬಿರ- ವಿದ್ಯಾರ್ಥಿ ಶಿಕ್ಷಕ ವಿಶೇಷ ಯೋಗ ಸರ್ಟಿಫಿಕೇಟ್‌ ಕೋರ್ಸ್

Monday, July 14th, 2025

ವಿವೇಕಾನಂದ ಶಿಕ್ಷಣ ಮಹಾವಿದ್ಯಾಲಯದಲ್ಲಿ ಜುಲೈ 11ರಿಂದ 13 ರವರೆಗೆ ಆನಂದೋತ್ಸವ ಶಿಬಿರ– ಯೋಗ ಸರ್ಟಿಫಿಕೇಟ್‌ ಕೋರ್ಸ್ ಉದ್ಘಾಟಿಸಲಾಯಿತು.     ಕಾರ್ಯಕ್ರಮವನ್ನು ಕಾಲೇಜಿನ ಪ್ರಾಂಶುಪಾಲೆ ಡಾ. ಶೋಭಿತ ಸತೀಶ್ ಹಾಗೂ ಶ್ರೀಮತಿ ಶರಾವತಿ ರವಿ ನಾರಾಯಣ್ ದೀಪ ಪ್ರಜ್ವಲನೆಯ ಮೂಲಕ ಪ್ರಾರಂಭಿಸಿದರು. ಸಂಪನ್ಮೂಲ ವ್ಯಕ್ತಿ ಯೋಗ ಶಿಕ್ಷಕಿ ಶ್ರೀಮತಿ ಶರಾವತಿ ರವಿ ನಾರಾಯಣ್ ಶಿಬಿರವನ್ನು ನಡೆಸಿಕೊಟ್ಟರು. ಪ್ರಶಿಕ್ಷಣಾರ್ಥಿಗಳು ಪಾಲ್ಗೊಂಡಿದ್ದರು.

ಗರ್ಭಾಶಯ ಕ್ಯಾನ್ಸರ್ ಕುರಿತು ಜಾಗೃತಿ ಕಾರ್ಯಕ್ರಮ

ಗರ್ಭಾಶಯ ಕ್ಯಾನ್ಸರ್ ಕುರಿತು ಜಾಗೃತಿ ಕಾರ್ಯಕ್ರಮ

Monday, July 14th, 2025

ವಿವೇಕಾನಂದ ಶಿಕ್ಷಣ ಮಹಾವಿದ್ಯಾಲಯದಲ್ಲಿ ಜುಲೈ 10ರಂದು ಗರ್ಭಾಶಯ ಕ್ಯಾನ್ಸರ್ ಕುರಿತು ಜಾಗೃತಿ ಕಾರ್ಯಕ್ರಮ ನಡೆಯಿತು. ಕಾರ್ಯಕ್ರಮದ ಸಂಪನ್ಮೂಲ ವ್ಯಕ್ತಿಯಾಗಿ ಆಗಮಿಸಿದ್ದ ಶ್ರೀಮತಿ ಅಮಿತಾ ಅವರು ಗರ್ಭಾಶಯ ಕ್ಯಾನ್ಸರ್ ಬಾರದಂತೆ ಯಾವ ರೀತಿ ತಡೆಗಟ್ಟಬಹುದು  ಎಂಬುದರ ಬಗ್ಗೆ ಮಾಹಿತಿ ನೀಡಿದರು. ಕಾರ್ಯಕ್ರಮದಲ್ಲಿ ಅಕ್ಷಯ್, ಸಹಾಯಕ ಪ್ರಾಧ್ಯಾಪಕರಾದ ಶ್ರೀಮತಿ ರಾಜೀವಿ. ಬಿ ಮತ್ತು ಶ್ರೀಮತಿ ಅಕ್ಷತಾ ಎಂ ಉಪಸ್ಥಿತರಿದ್ದರು. ದ್ವಿತೀಯ ವರ್ಷದ ಪ್ರಶಿಕ್ಷಣಾರ್ಥಿ ಧನ್ಯಶ್ರೀ ಎನ್ ನಿರೂಪಿಸಿದರು.

ಗುರುಪೂರ್ಣಿಮೆ ಆಚರಣೆ

ಗುರುಪೂರ್ಣಿಮೆ ಆಚರಣೆ

Monday, July 14th, 2025

ವಿವೇಕಾನಂದ ಶಿಕ್ಷಣ ಮಹಾವಿದ್ಯಾಲಯದಲ್ಲಿ ಜುಲೈ 10ರಂದು  ಕಾಲೇಜಿನ ಪ್ರಾಧ್ಯಾಪಕರು ಮತ್ತು ಸಿಬ್ಬಂದಿಗಳಿಗೆ ಪ್ರಶಿಕ್ಷಣಾರ್ಥಿಗಳು ಹೂವನ್ನು ನೀಡಿ ಆಶೀರ್ವಾದ ಪಡೆಯುವುದರ ಮೂಲಕ ಗುರುಪೂರ್ಣಿಮೆ ಆಚರಿಸಲಾಯಿತು. ಪ್ರಾಂಶುಪಾಲರಾದ ಡಾ. ಶೋಭಿತ ಸತೀಶ್ ಮಾತನಾಡಿ ಇದುವರೆಗೆ ಕಾಲೇಜಿನಲ್ಲಿ ನಡೆಸುತ್ತಿದ್ದ ಸಂಸ್ಕೃತಿಯನ್ನು ನೀವು ಪಾಲಿಸಿ ತೋರಿಸಿದ್ದೀರಿ ಎಂದು ಅಭಿನಂದಿಸಿದರು. ಹಾಗೆಯೇ ಯಾವ ಗುರು ಶ್ರೇಷ್ಠ- ಕನಿಷ್ಠ ಎಂಬುದು ಇಲ್ಲ, ಒಂದಕ್ಷರ ತಿಳಿಸಿದವರು ಕೂಡ ಗುರುವೇ ಆಗುತ್ತಾರೆ ಎಂದರು. ಕಾರ್ಯಕ್ರಮದಲ್ಲಿ ಸಹಾಯಕ ಪ್ರಾಧ್ಯಾಪಕರು, ಸಿಬ್ಬಂದಿಗಳು ಹಾಗೂ ಪ್ರಶಿಕ್ಷಣಾರ್ಥಿಗಳು ಪಾಲ್ಗೊಂಡಿದ್ದರು.

ದ್ವಿತೀಯ ವರ್ಷದ ಪ್ರಶಿಕ್ಷಣಾರ್ಥಿಗಳಿಂದ ನಾಟಕ ಪ್ರದರ್ಶನ

ದ್ವಿತೀಯ ವರ್ಷದ ಪ್ರಶಿಕ್ಷಣಾರ್ಥಿಗಳಿಂದ ನಾಟಕ ಪ್ರದರ್ಶನ

Monday, July 14th, 2025

ವಿವೇಕಾನಂದ ಶಿಕ್ಷಣ ಮಹಾವಿದ್ಯಾಲಯದಲ್ಲಿ ಜುಲೈ 8ರಂದು ಶಿಕ್ಷಣದಲ್ಲಿ ನಾಟಕ ಮತ್ತು ಕಲೆಯ ಭಾಗವಾಗಿ  ದ್ವಿತೀಯ ವರ್ಷದ ಪ್ರಶಿಕ್ಷಣಾರ್ಥಿಗಳಿಂದ ನಾಟಕ ಪ್ರದರ್ಶನ ನಡೆಯಿತು.   ಮುಖ್ಯ ಅತಿಥಿಯಾಗಿ ಆಗಮಿಸಿದ ಶ್ರೀ ಮೂಕಾಂಬಿಕಾ ಕಲ್ಚರಲ್ ಅಕಾಡೆಮಿ, ಪುತ್ತೂರು ಇಲ್ಲಿನ ನೃತ್ಯ ಮತ್ತು ಸಂಗೀತ ಶಿಕ್ಷಕಿ ವಿದುಷಿ ಪ್ರೀತಿಕಲಾ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡುತ್ತಾ, ಪ್ರಶಿಕ್ಷಣಾರ್ಥಿಗಳು ಸೃಜನಶೀಲರಾಗಬೇಕು. ಕಲೆಯ ಮೂಲಕ ಶಿಕ್ಷಕರು ಗದ್ಯ ಮಾತ್ರವಲ್ಲದೆ ಪರಿಪೂರ್ಣ ಪ್ಯಾಕೇಜ್ ಆಗಬೇಕು. ಯೋಗ, ನಾಟಕ, ಸಂಗೀತ, ಶಿಕ್ಷಣ ಮುಂತಾದ ಎಲ್ಲಾ ಕ್ಷೇತ್ರದಲ್ಲಿಯೂ ತಮ್ಮನ್ನು ತಾವು ತೊಡಗಿಸಿಕೊಳ್ಳಬೇಕೆಂದು ತಿಳಿಸಿದರು. […]

“ಗಮಕವಾಚನ- ವ್ಯಾಖ್ಯಾನ” ಕಾರ್ಯಕ್ರಮ

Monday, July 14th, 2025

ವಿವೇಕಾನಂದ ಶಿಕ್ಷಣ ಮಹಾವಿದ್ಯಾಲಯದಲ್ಲಿ ಜೂನ್ 28ರಂದು ಕರ್ನಾಟಕ ಗಮಕ ಕಲಾ ಪರಿಷತ್ತು (ರಿ) ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಕರ್ನಾಟಕ ಸರಕಾರದ ಸಹಯೋಗದಲ್ಲಿ ಕರ್ಣ ಭೇದನ- ಕಾವ್ಯ ಭಾಗದ “ಗಮಕವಾಚನ- ವ್ಯಾಖ್ಯಾನ” ಕಾರ್ಯಕ್ರಮ ನಡೆಯಿತು. ಕಾರ್ಯಕ್ರಮದಲ್ಲಿ ಕರ್ನಾಟಕ ಗಮಕ ಕಲಾ ಪರಿಷತ್, ಪುತ್ತೂರು ಘಟಕದ ಕಾರ್ಯಕಾರಣಿ ಸಮಿತಿಯ ಕಾರ್ಯದರ್ಶಿ ಶ್ರೀಮತಿ ಶಂಕರಿ ಶರ್ಮ ಪ್ರಸ್ತಾವಿಕವಾಗಿ ಮಾತನಾಡಿ, ಗಮಕವಾಚನ ಮತ್ತು ವ್ಯಾಖ್ಯಾನ ರಾಮಾಯಣ ಮತ್ತು ಮಹಾಭಾರತದಿಂದ ಆಯ್ದ ಪೌರಾಣಿಕ ಕಥೆಯ ಭಾಗವನ್ನು ಪ್ರಸ್ತುತಪಡಿಸುವುದಾಗಿದೆ. ಇದರಲ್ಲಿ ಹಿನ್ನೆಲೆ ವಾದ್ಯ […]

ಶಿಕ್ಷಕರಿಗಾಗಿ “ವೇದಗಣಿತ ಆನ್ಲೈನ್ ಸರ್ಟಿಫಿಕೇಟ್ ಕೋರ್ಸ್” ನ ಉದ್ಘಾಟನಾ ಕಾರ್ಯಕ್ರಮ

Monday, July 14th, 2025

ವಿವೇಕಾನಂದ ವಿದ್ಯಾವರ್ಧಕ ಸಂಘ ಪುತ್ತೂರು (ರಿ.), ವಿದ್ಯಾಭಾರತಿ ಉಚ್ಚಶಿಕ್ಷಾ ಸಂಸ್ಥಾನ, ಕರ್ನಾಟಕ ಹಾಗೂ ವಿವೇಕಾನಂದ ಶಿಕ್ಷಣ ಮಹಾವಿದ್ಯಾಲಯ, ಪುತ್ತೂರು ಒಟ್ಟಾಗಿ ಅಯೋಜಿಸಿದ ಶಿಕ್ಷಕರಿಗಾಗಿ ವೇದಗಣಿತ ಆನ್ಲೈನ್ ಸರ್ಟಿಫಿಕೇಟ್ ಕೋರ್ಸ್ ನ ಉದ್ಘಾಟನೆ ಜೂನ್ 27 ರಂದು ನಡೆಯಿತು. ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ವಿವೇಕಾನಂದ ವಿದ್ಯಾವರ್ಧಕ ಸಂಘದ ಕಾರ್ಯದರ್ಶಿ ಡಾ ಕೆ ಎಂ ಕೃಷ್ಣ ಭಟ್, ಭಾರತೀಯ ಜ್ಞಾನ ಪರಂಪರೆಯಲ್ಲಿ ವೇದ ಗಣಿತವೂ ಒಂದು ಭಾಗ. ಹಾಗೆಯೇ ಗಣಿತವು ಪ್ರತಿಯೊಬ್ಬರಿಗೂ ಅಗತ್ಯ. ಇದು ನಮ್ಮ ನಿತ್ಯ ಜೀವನದಲ್ಲಿ ಅನಿವಾರ್ಯವೂ […]

ಪ್ರಥಮ ಚಿಕಿತ್ಸಾ ಪ್ರಾತ್ಯಕ್ಷಿಕೆ

Monday, July 14th, 2025

ವಿವೇಕಾನಂದ ಶಿಕ್ಷಣ ಮಹಾವಿದ್ಯಾಲಯದಲ್ಲಿ ದ್ವಿತೀಯ ವರ್ಷದ ಪ್ರಶಿಕ್ಷಣಾರ್ಥಿಗಳಿಂದ ಜೂನ್ 26ರಂದು ಪ್ರಥಮ ಚಿಕಿತ್ಸಾ ಪ್ರಾತ್ಯಕ್ಷಿಕೆ  ನಡೆಯಿತು.     ಕಾರ್ಯಕ್ರಮದಲ್ಲಿ ಹೃದಯಾಘಾತ, ವಿಷಸೇವನೆ, ಹಾವುಕಡಿತ, ಮೂಳೆ ಮುರಿತ ಮುಂತಾದವುಗಳಿಗೆ ಹೇಗೆ ಪ್ರಥಮ ಚಿಕಿತ್ಸೆ ನೀಡಬೇಕು ಎಂಬುದನ್ನು ಪ್ರಶಿಕ್ಷಣಾರ್ಥಿಗಳು ಪ್ರದರ್ಶನದ ಮೂಲಕ ಅರಿವು ಮೂಡಿಸಿದರು. ಕಾರ್ಯಕ್ರಮದಲ್ಲಿ ಕಾಲೇಜಿನ ಪ್ರಾಂಶುಪಾಲರಾದ ಡಾ. ಶೋಭಿತ ಸತೀಶ್, ಸಹಾಯಕ ಪ್ರಾಧ್ಯಾಪಕರು ಉಪಸ್ಥಿತರಿದ್ದರು. ದ್ವಿತೀಯ ವರ್ಷದ ಪ್ರಶಿಕ್ಷಣಾರ್ಥಿಗಳಾದ ಅನುಷಾ ಎಸ್ ನಿರೂಪಿಸಿ, ಭಾಗ್ಯಶ್ರೀ. ಯು ಸ್ವಾಗತಿಸಿದರು, ಕಿಶನ್ ಧನ್ಯವಾದ ಸಲ್ಲಿಸಿದರು.