ರ‍್ಯಾಗಿಂಗ್ ವಿರೋಧಿ ಜಾಗೃತಿ ಕಾರ್ಯಕ್ರಮ

Tuesday, May 6th, 2025

 ವಿವೇಕಾನಂದ ಶಿಕ್ಷಣ ಮಹಾವಿದ್ಯಾಲಯದಲ್ಲಿ ಏ. 24ರಂದು ರ‍್ಯಾಗಿಂಗ್ ವಿರೋಧಿ ಜಾಗೃತಿ ಕಾರ್ಯಕ್ರಮ ನಡೆಯಿತು. ಕಾರ್ಯಕ್ರಮಕ್ಕೆ ಸಂಪನ್ಮೂಲ ವ್ಯಕ್ತಿಯಾಗಿ ಆಗಮಿಸಿದ ಅಡ್ವೊಕೇಟ್ ಶ್ರೀಮತಿ ಸ್ವಾತಿ ಜಗನ್ನಾಥ್ ರೈ ಅವರು, “ಭಾರತದಲ್ಲಿ ರ‍್ಯಾಗಿಂಗ್ ನಿಷೇಧವಾಗಿದ್ದರೂ ಇತ್ತೀಚಿನ ದಿನಗಳಲ್ಲಿ ಕಾಲೇಜುಗಳಲ್ಲಿ ಇದು ಹೆಚ್ಚಾಗಿ ಕಾಣಬರುತ್ತಿದೆ. ಯಾರು ರ‍್ಯಾಗಿಂಗ್ ಗೊಳಗಾಗುತ್ತಾರೋ ಅವರು ಯುಜಿಸಿ 2009ರ ಕಾಯ್ದೆಯಡಿಯಲ್ಲಿ ದೂರು ನೀಡಬಹುದಾಗಿದೆ. ಇದರಿಂದ ಅಪರಾಧಿಗೆ ಕಾನೂನುಬದ್ಧವಾದ ಶಿಕ್ಷೆ ವಿಧಿಸಲಾಗುತ್ತದೆ,” ಎಂದು ರ‍್ಯಾಗಿಂಗ್ ಅನ್ನು ತಡೆಗಟ್ಟುವ ವಿವಿಧ ಮಾರ್ಗಗಳ ಕುರಿತು ಸವಿವರವಾಗಿ ಮಾತನಾಡಿದರು. ಕಾಲೇಜಿನ ಪ್ರಾಂಶುಪಾಲೆ ಡಾ. […]

ದ್ವಿತೀಯ ವರ್ಷದ ಪ್ರಶಿಕ್ಷಣಾರ್ಥಿಗಳಿಂದ ಪಿಲಿಕುಳ ನಿಸರ್ಗಧಾಮಕ್ಕೆ ಸಾಂಸ್ಕೃತಿಕ ಅಧ್ಯಯನ ಭೇಟಿ

Monday, April 21st, 2025

ವಿವೇಕಾನಂದ ಕಾಲೇಜ್ ಆಫ್ ಎಜುಕೇಶನ್‌ನ ದ್ವಿತೀಯ ವರ್ಷದ ಪ್ರಶಿಕ್ಷಣಾರ್ಥಿಗಳು ಏಪ್ರಿಲ್ 15ರಂದು ಮಂಗಳೂರಿನ ಪಿಲಿಕುಳ ನಿಸರ್ಗಧಾಮಕ್ಕೆ ಸಾಂಸ್ಕೃತಿಕ ಅಧ್ಯಯನದ ಉದ್ದೇಶದಿಂದ ಭೇಟಿ ನೀಡಿದರು. ಪಿಲಿಕುಳದಲ್ಲಿನ ಗುತ್ತಿನ ಮನೆ, ವಿಜ್ಞಾನ ಕೇಂದ್ರ, ಸಂಶೋಧನಾ ಕೇಂದ್ರ, ಸ್ವಾಮಿ ವಿವೇಕಾನಂದ ತಾರಾಲಯ, ಹರ್ಬೇರಿಯಂ ಮತ್ತು ಬೋಟಾನಿಕಲ್ ಗಾರ್ಡನ್, ಮ್ಯೂಸಿಯಂ, ಪ್ರಾಣಿ ಸಂಗ್ರಹಾಲಯ ಇತ್ಯಾದಿ ಸ್ಥಳಗಳಿಗೆ ಭೇಟಿ ನೀಡಿ ಅಲ್ಲಿನ ವೈಶಿಷ್ಟ್ಯತೆ ಮತ್ತು ಮಾಹಿತಿಯನ್ನು ಕಲೆ ಹಾಕಿದರು. ಇಂದಿನ ವಿದ್ಯಾರ್ಥಿಗಳಿಗೆ ಪುರಾತನ ಕಾಲದ ಸಂಸ್ಕೃತಿ ಮತ್ತು ಕೃಷಿ ಪರಂಪರೆಗಳ ಅರಿವು ಕಡಿಮೆ ಇರುವುದರಿಂದ, […]

ಅಕ್ಷಯ ಕಾಲೇಜಿನಲ್ಲಿ ನಡೆದ ಅಂತರ್-ಕಾಲೇಜು ಸಾಂಸ್ಕೃತಿಕ ಸ್ಪರ್ಧೆಯಲ್ಲಿ ಪ್ರಶಸ್ತಿ

Monday, April 21st, 2025

ಅಕ್ಷಯ ಕಾಲೇಜು, ಪುತ್ತೂರು ಇಲ್ಲಿ ಏಪ್ರಿಲ್ 8ರಂದು ನಡೆದ ‘ಕೃತ್ವ 2025’ ಅಂತರ್-ಕಾಲೇಜು ಸಾಂಸ್ಕೃತಿಕ ಸ್ಪರ್ಧೆಯಲ್ಲಿ ವಿವೇಕಾನಂದ ಕಾಲೇಜ್ ಆಫ್ ಎಜುಕೇಶನ್ ನ ಪ್ರಶಿಕ್ಷಣಾರ್ಥಿಗಳು ಸೆಕೆಂಡ್ ರನ್ನರ್-ಅಪ್ ಸ್ಥಾನ ಪಡೆದು ಕಾಲೇಜಿಗೆ ಗೌರವ ತಂದಿದ್ದಾರೆ. ಈ ಸ್ಪರ್ಧೆಯಲ್ಲಿ ವಿವಿಧ ಸಾಂಸ್ಕೃತಿಕ ಸ್ಪರ್ಧೆಗಳನ್ನು ಆಯೋಜಿಸಲಾಗಿದ್ದು, ಬೀದಿ ನಾಟಕದಲ್ಲಿ ಅಶ್ವಿನಿ ಕೆ ತಂಡ ಪ್ರಥಮ ಸ್ಥಾನ , ಟ್ಯಾಟೂ ಡಿಸೈನ್ ಸ್ಪರ್ಧೆಯಲ್ಲಿ ಪಲ್ಲವಿ ಮತ್ತು ರಶ್ಮಿ ಪ್ರಥಮ ಹಾಗೂ ಸೋಪ್ ಕರ್ವಿಂಗ್ ಸ್ಪರ್ಧೆಯಲ್ಲಿ ದ್ವಿತೀಯ , ಸಮೂಹ ನೃತ್ಯದಲ್ಲಿ ಭವಿತ […]

ಕೆ. ಎಸ್. ಓ. ಯು. ದೂರಶಿಕ್ಷಣ ಪ್ರಶಿಕ್ಷಣಾರ್ಥಿಗಳಿಂದ ‘ಗುರುವಂದನೆ’

Tuesday, April 8th, 2025

ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾಲಯ, ಮೈಸೂರು ಇದರ ಅಧ್ಯಯನ ಕೇಂದ್ರ ವಿವೇಕಾನಂದ ಶಿಕ್ಷಣ ಮಹಾವಿದ್ಯಾಲಯದಲ್ಲಿ ಏಪ್ರಿಲ್ 05 ರಂದು 2025-26 ನೇ ಸಾಲಿನ ಬಿ. ಎಡ್. ದೂರಶಿಕ್ಷಣದ ಪ್ರಶಿಕ್ಷಣಾರ್ಥಿಗಳಿಂದ ‘ಗುರುವಂದನೆ ಕಾರ್ಯಕ್ರಮ’ ನಡೆಯಿತು.     ಕಾರ್ಯಕ್ರಮದ ಮುಖ್ಯ ಆಶಯದಂತೆ, ಕಾಲೇಜಿನ ಆಡಳಿತ ಮಂಡಳಿ, ಪ್ರಾಂಶುಪಾಲರು, ಎಲ್ಲಾ ಸಹಾಯಕ ಪ್ರಾಧ್ಯಾಪಕರು ಹಾಗೂ ಬೋಧಕೇತರ ಸಿಬ್ಬಂದಿಗಳನ್ನು ಈ ಸಂದರ್ಭದಲ್ಲಿ ಗೌರವಿಸಲಾಯಿತು.  ಪ್ರಶಿಕ್ಷಣಾರ್ಥಿಗಳು ತಮ್ಮ ಸವಿನೆನಪುಗಳನ್ನು ಹಂಚಿಕೊಂಡರು. ಈ ಸಂದರ್ಭದಲ್ಲಿ ಉಪಸ್ಥಿತರಿದ್ದ ಗುರುವಂದನೆ ಸ್ವೀಕರಿಸಿದ ಪ್ರಾಧ್ಯಾಪಕರು, ಆಡಳಿತ ಮಂಡಳಿಯ ಸದಸ್ಯರಾದ […]

ವಿಶ್ವ ಮಹಿಳಾ ದಿನಾಚರಣೆ ಅಂಗವಾಗಿ ಕಾನೂನು ಮಾಹಿತಿ ಕಾರ್ಯಕ್ರಮ

Tuesday, April 8th, 2025

ವಿವೇಕಾನಂದ ಶಿಕ್ಷಣ ಮಹಾವಿದ್ಯಾಲಯ, ಪುತ್ತೂರು ಇಲ್ಲಿ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ (ಮಂಗಳೂರು), ತಾಲೂಕು ಕಾನೂನು ಸೇವೆಗಳ ಸಮಿತಿ (ಪುತ್ತೂರು), ವಕೀಲರ ಸಂಘ, ಹಾಗೂ ಲಯನ್ಸ್ ಕ್ಲಬ್, ಪುತ್ತೂರು ಸಹಯೋಗದಲ್ಲಿ ಮಾರ್ಚ್ 27 ರಂದು ವಿಶ್ವ ಮಹಿಳಾ ದಿನಾಚರಣೆ ಅಂಗವಾಗಿ ಕಾನೂನು ಮಾಹಿತಿ ಕಾರ್ಯಕ್ರಮ ನಡೆಯಿತು. ಕಾರ್ಯಕ್ರಮವನ್ನು ಉದ್ಘಾಟಿಸಿದ ಶ್ರೀಮತಿ ಅರ್ಚನಾ ಕೆ. ಉಣ್ಣಿತಾನ್, ಗೌರವಾನ್ವಿತ ಪ್ರಧಾನ ವ್ಯವಹಾರಿಕ ನ್ಯಾಯಧೀಶರು ಮತ್ತು ಜೆ. ಎಂ. ಎಫ್. ಸಿ. ಪುತ್ತೂರು ಮಾತನಾಡಿ, “ಮಹಿಳೆಯರು ಪ್ರತಿಯೊಂದು ಕ್ಷೇತ್ರದಲ್ಲೂ ಮುನ್ನಡೆ ಸಾಧಿಸಬೇಕು […]

ಸಾಂದೀಪ್ ವಿಶೇಷ ಶಾಲೆಗೆ ಅಧ್ಯಯನ ಭೇಟಿ

Tuesday, April 8th, 2025

ವಿವೇಕಾನಂದ ಶಿಕ್ಷಣ ಮಹಾವಿದ್ಯಾಲಯದ ದ್ವಿತೀಯ ವರ್ಷದ  ಪ್ರಶಿಕ್ಷಣಾರ್ಥಿಗಳು  ಸಮನ್ವಯ ಶಿಕ್ಷಣದ ಅಧ್ಯಯನಕ್ಕಾಗಿ ಎಂ ಬಿ ಫೌಂಡೇಶನ್‌ನ ಸಾಂದೀಪ್ ವಿಶೇಷ ಶಾಲೆಗೆ ಮಾರ್ಚ್ 20 ರಂದು ಭೇಟಿ ನೀಡಿದರು. ಈ ಸಂದರ್ಭದಲ್ಲಿ ಶಾಲೆಯ ಅಧ್ಯಕ್ಷರಾದ ಶ್ರೀ ಸದಾಶಿವ ಮಾತನಾಡಿ, “ಮಕ್ಕಳಿಗೆ ಉತ್ತಮ ಸಂಸ್ಕಾರ, ಸಂಸ್ಕೃತಿ ಮತ್ತು ಜೀವನ ಮೌಲ್ಯಗಳನ್ನು ಬೋಧಿಸುವಲ್ಲಿ ಶಿಕ್ಷಕರ ಪಾತ್ರ ಅತ್ಯಂತ ಮುಖ್ಯವಾಗಿದೆ. ಅವರು ಭವಿಷ್ಯದ ಉತ್ತಮ ನಾಗರಿಕರನ್ನು ರೂಪಿಸಲು ಪ್ರಭಾವ ಬೀರುತ್ತಾರೆ. ಶಿಕ್ಷಕರು ಶಾಲೆಯಲ್ಲಿ ವಿವಿಧ ರೀತಿಯ ಮಕ್ಕಳನ್ನು ಎದುರಿಸುತ್ತಾರೆ,ಅವರ ಪ್ರತಿಭೆಗಳನ್ನು ಗುರುತಿಸಿ, ಸರಿಯಾದ […]

2025-26ನೇ ಸಾಲಿನ ಪ್ರಥಮ ವರ್ಷದ ಪ್ರಶಿಕ್ಷಣಾರ್ಥಿಗಳಿಗೆ ಸ್ವಾಗತ ಕಾರ್ಯಕ್ರಮ ಹಾಗೂ ಪ್ರತಿಭಾ ದಿನಾಚರಣೆ

Tuesday, April 8th, 2025

ವಿವೇಕಾನಂದ ಶಿಕ್ಷಣ ಮಹಾವಿದ್ಯಾಲಯದಲ್ಲಿ 2025-26ನೇ ಸಾಲಿನ ಪ್ರಥಮ ವರ್ಷದ ಪ್ರಶಿಕ್ಷಣಾರ್ಥಿಗಳಿಗೆ ಸ್ವಾಗತ ಕಾರ್ಯಕ್ರಮ ಹಾಗೂ ಪ್ರತಿಭಾ ದಿನಾಚರಣೆ ಮಾರ್ಚ್ 19 ರಂದು ನಡೆಯಿತು. ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಬೆಳಾಲು ಎಸ್.ಡಿ .ಎಂ. ಪ್ರೌಢಶಾಲೆಯ ನಿವೃತ್ತ ಶಿಕ್ಷಕರಾದ ಶ್ರೀ ರಾಮಕೃಷ್ಣ ಭಟ್ ಅವರು, “ಯಶಸ್ಸಿನ ಹಿಂದೆ ಅನೇಕ ಸವಾಲುಗಳು ಇವೆ. ಆ ಸವಾಲುಗಳನ್ನು ಧೈರ್ಯದಿಂದ ಎದುರಿಸಿ ಮುಂದುವರೆಯಬೇಕು. ಶಿಕ್ಷಕರು ತಮ್ಮ ವೃತ್ತಿಯನ್ನು ಕೇವಲ ಉದ್ಯೋಗವಾಗಿ ನೋಡದೆ, ಅದನ್ನು ಪ್ರವೃತ್ತಿಯಾಗಿ ಸ್ವೀಕರಿಸಬೇಕು. ಒಮ್ಮೆ ಶಿಕ್ಷಕ ವೃತ್ತಿಗೆ ಪ್ರವೇಶಿಸಿದ ಬಳಿಕ ಹಿಂತಿರುಗಿ […]

2025 ನೇ ಸಾಲಿನ ವಿದ್ಯಾರ್ಥಿ ಸಂಘದ  ಚುನಾವಣೆ

Tuesday, April 8th, 2025

ವಿವೇಕಾನಂದ ಶಿಕ್ಷಣ ಮಹಾವಿದ್ಯಾಲಯದಲ್ಲಿ  2025 ನೇ ಸಾಲಿನ ವಿದ್ಯಾರ್ಥಿ ಸಂಘದ  ಚುನಾವಣೆ  ಮಾರ್ಚ್ 17ರಂದು ನಡೆಯಿತು. ಮತದಾನ ಪ್ರಕ್ರಿಯೆಯನ್ನು ಕಾಲೇಜಿನ ಸಹಾಯಕ ಪ್ರಾಧ್ಯಾಪಕಿ ಶ್ರೀಮತಿ ಭುವನೇಶ್ವರಿ ಎ ಎನ್. ನಡೆಸಿಕೊಟ್ಟರು. ಮತ ಎಣಿಕೆಯ ನಂತರ ಆಯ್ಕೆಯಾದ ಅಭ್ಯರ್ಥಿಗಳ ಹೆಸರುಗಳನ್ನು ಪ್ರಾಂಶುಪಾಲೆ ಡಾ. ಶೋಭಿತ ಸತೀಶ್ ಘೋಷಿಸಿದರು. ವಿದ್ಯಾರ್ಥಿ ಸಂಘದ ಅಧ್ಯಕ್ಷನಾಗಿ ಕಿಶನ್, ಉಪಾಧ್ಯಕ್ಷನಾಗಿ ತಿಪ್ಪೇಸ್ವಾಮಿ, ತರಗತಿ ಪ್ರತಿನಿಧಿಗಳಾಗಿ ಅನುಷಾ ಮತ್ತು  ಸುಚಿತ್ರ ಪಿ. ಸ್ಕ್ವಾಡ್ ಲೀಡರ್ ಗಳಾಗಿ  ಅಮೃತ ಪಿ. ಶರಣ್ಯ, ಅನನ್ಯ, ದೀಕ್ಷಿತ, ಹನುಮಂತಪ್ಪ , […]

ಪ್ರಥಮ ವರ್ಷದ ಪ್ರಶಿಕ್ಷಣಾರ್ಥಿಗಳಿಗೆ ಜನರಲ್ ಓರಿಯೆಂಟೇಶನ್ ಕಾರ್ಯಕ್ರಮ

Tuesday, April 8th, 2025

ವಿವೇಕಾನಂದ ಶಿಕ್ಷಣ ಮಹಾವಿದ್ಯಾಲಯದಲ್ಲಿ ನೂತನವಾಗಿ ಸೇರ್ಪಡೆಗೊಂಡ 2024-25ನೇ ಸಾಲಿನ ಪ್ರಥಮ ವರ್ಷದ ಪ್ರಶಿಕ್ಷಣಾರ್ಥಿಗಳಿಗೆ ಜನರಲ್ ಓರಿಯೆಂಟೇಶನ್ ಕಾರ್ಯಕ್ರಮ ಮಾರ್ಚ್ 10, 2025 ರಂದು ನಡೆಯಿತು. ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಯಾಗಿ ಆಗಮಿಸಿದ ಡಾ. ಸುಲೇಖಾ ವರದರಾಜ್, ಆಡಳಿತ ಮಂಡಳಿ ಸದಸ್ಯರು ವಿವೇಕಾನಂದ ಶಿಕ್ಷಣ ಮಹಾವಿದ್ಯಾಲಯ ಅವರು ಮಾತನಾಡಿ, ಶಿಕ್ಷಕರು ಜ್ಞಾನವನ್ನು ಮಾತ್ರವಲ್ಲ, ಮೌಲ್ಯ ಹಾಗೂ ಕೌಶಲಗಳನ್ನು ಸಹ ಬೆಳೆಸಿಕೊಳ್ಳಬೇಕು. ಅವರು ಸಮಾಜಮುಖಿ ಚಿಂತಕರಾಗಬೇಕು. ಅಧಿಕಾರ ಮತ್ತು ಹುದ್ದೆಗಳು ಬಂದು ಹೋಗುತ್ತವೆ, ಆದರೆ ಶಿಕ್ಷಕರ ಜ್ಞಾನ ಹಾಗೂ ವಿದ್ಯಾರ್ಥಿಗಳ ಮೇಲಿನ […]

ವಿವೇಕಾನಂದ ನರ್ಸರಿ ಶಿಕ್ಷಕರ ಶಿಕ್ಷಣ ಅಕಾಡೆಮಿ ಉದ್ಘಾಟನೆ

Tuesday, April 8th, 2025

ವಿವೇಕಾನಂದ ಶಿಕ್ಷಣ ಮಹಾವಿದ್ಯಾಲಯದಲ್ಲಿ ವಿವೇಕಾನಂದ ನರ್ಸರಿ ಶಿಕ್ಷಕರ ಶಿಕ್ಷಣ ಅಕಾಡೆಮಿಯ ಉದ್ಘಾಟನಾ ಸಮಾರಂಭವು ಫೆಬ್ರವರಿ 28 ರಂದು ನಡೆಯಿತು. ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಶ್ರೀಮತಿ ತಾರಾ ಕಾಳಿಚರಣ್, ವಿದ್ಯಾಭಾರತಿ ಕ್ಷೇತ್ರೀಯ ಸಹ ಶಿಶು ಶಿಕ್ಷಣ ಪ್ರಮುಖ್, ಬೆಂಗಳೂರು ಅವರು, ಮಗು ಸಮಗ್ರ ಬೆಳವಣಿಗೆಯನ್ನು ಪಡೆಯಲು ಶಿಕ್ಷಣವು ತಾಯಿಯ ಗರ್ಭದಲ್ಲಿಯೇ ಆರಂಭವಾಗಬೇಕು. ಮಗು ಮೂರು ವರ್ಷದವರೆಗೆ ತಾಯಿಯಿಂದಲೇ ಸಂಸ್ಕಾರ, ನೈತಿಕ ಮೌಲ್ಯಗಳು ಹಾಗೂ ಪ್ರಾಥಮಿಕ ಜ್ಞಾನವನ್ನು ಪಡೆಯುತ್ತದೆ. ನಂತರ ಶಾಲಾ ವಾತಾವರಣದಲ್ಲಿ ಮೊಂಟೆಸರಿ ಶಿಕ್ಷಕರ ಮಾರ್ಗದರ್ಶನದಲ್ಲಿ ಬೆಳೆಯಲು ಪ್ರಾರಂಭಿಸುತ್ತದೆ. […]