ಪ್ರತಿಭಾ ದಿನಾಚರಣೆ

ಪ್ರತಿಭಾ ದಿನಾಚರಣೆ

Wednesday, April 27th, 2022

ವಿವೇಕಾನಂದ ಶಿಕ್ಷಣ ಮಹಾವಿದ್ಯಾಲಯದಲ್ಲಿ  27.04.2022 ರಂದು ಪ್ರತಿಭಾ ದಿನಾಚರಣೆ ಕಾರ್ಯಕ್ರಮ ನಡೆಯಿತು. ಈ ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಯಾಗಿ ಗೀತಾ ಸಾಹಿತ್ಯ ಸಂಭ್ರಮ ಕಾರ್ಯಕ್ರಮದಿಂದ ಮನೆ ಮಾತಾದ ವಿಠಲ್ ನಾಯಕ್ ಆಗಮಿಸಿ, ಶಿಕ್ಷಕ ವೃತ್ತಿ ಎಂದರೆ ಅತೀ ಶ್ರೇಷ್ಠವಾದ ವೃತ್ತಿ ಮತ್ತು ಅದು ಜೀವಂತ ವ್ಯಕ್ತಿಗಳೊಂದಿಗೆ ಮಾಡುವ ಕೆಲಸ ಎಂದರು. ಶಿಕ್ಷಣವೆಂಬುದು ಮೊದಲು ಮನೆಯಿಂದಲೇ ಆರಂಭವಾಗುತ್ತದೆ ಶಾಲೆಯಿಂದಲ್ಲ. ಜೀವನ ಪರೀಕ್ಷೆಯಿಂದ ನಿಜವಾದ ಜೀವನ ಪಾಠ ಕಲಿಯುತ್ತೇವೆ ಎಂದು ಹೇಳಿದರು. ಪ್ರತಿಯೊಬ್ಬರಿಗೂ ಒಂದಲ್ಲ ಒಂದು ಹವ್ಯಾಸ ಎಂಬುದು ಇದ್ದೇ ಇರುತ್ತದೆ […]

ರೇಡಿಯೋ ಪಾಂಚಜನ್ಯ ದಲ್ಲಿ ಕಾರ್ಯಕ್ರಮ

ರೇಡಿಯೋ ಪಾಂಚಜನ್ಯ ದಲ್ಲಿ ಕಾರ್ಯಕ್ರಮ

Monday, April 25th, 2022

ವಿವೇಕಾನಂದ ಶಿಕ್ಷಣ ಮಹಾವಿದ್ಯಾಲಯದ ಪ್ರಶಿಕ್ಷಣಾರ್ಥಿಗಳು ವಿವೇಕಾನಂದ ಮಹಾವಿದ್ಯಾಲಯದ ಆವರಣದಲ್ಲಿರುವ ರೇಡಿಯೋ ಪಾಂಚಜನ್ಯ ದಲ್ಲಿ ಕಾರ್ಯಕ್ರಮವನ್ನು ನೀಡಿದರು.

ಪ್ರಜ್ಞಾ ಆಶ್ರಮಕ್ಕೆ ಭೇಟಿ

ಪ್ರಜ್ಞಾ ಆಶ್ರಮಕ್ಕೆ ಭೇಟಿ

Tuesday, April 19th, 2022

ವಿವೇಕಾನಂದ ಶಿಕ್ಷಣ ಮಹಾವಿದ್ಯಾಲಯದ ಪ್ರಶಿಕ್ಷಣಾರ್ಥಿಗಳು ಪ್ರಜ್ಞಾ ಆಶ್ರಮಕ್ಕೆ ಭೇಟಿ ನೀಡಿದರು. ಪ್ರಜ್ಞಾ ಶ್ರಮದ ಕುರಿತು ಪ್ರಶಿಕ್ಷಣಾರ್ಥಿಗಳಿಗೆ ಸಂಸ್ಥೆಯ ಅಣ್ಣಪ್ಪ ಮತ್ತು ಜ್ಯೋತಿ ಮಾಹಿತಿಯನ್ನು ನೀಡಿದರು. ಅಲ್ಲಿಯ ವಿದ್ಯಾರ್ಥಿಗಳಿಗಾಗಿ ಹಲವಾರು ಸಾಂಸ್ಕೃತಿಕ ಕಾರ್ಯಕ್ರಮವನ್ನು ಪ್ರಶಿಕ್ಷಣಾರ್ಥಿಗಳ ನೀಡಿದರು. ಈ ಕಾರ್ಯಕ್ರಮಕ್ಕೆ ಪ್ರಶಿಕ್ಷಣಾರ್ಥಿ ಗಣೇಶ್ ಕೃಷ್ಣ ಸ್ವಾಗತಿಸಿ, ವಿವೇಕಾನಂದ ಶಿಕ್ಷಣ ಮಹಾವಿದ್ಯಾಲಯದ ಉಪನ್ಯಾಸಕ ಮುರಳಿ ಕೃಷ್ಣ ವಂದಿಸಿದರು.

ಪುಸ್ತಕ ವಿಮರ್ಶೆ ಕಾರ್ಯಕ್ರಮ

ಪುಸ್ತಕ ವಿಮರ್ಶೆ ಕಾರ್ಯಕ್ರಮ

Tuesday, April 19th, 2022

ವಿವೇಕಾನಂದ ಶಿಕ್ಷಣ ಮಹಾವಿದ್ಯಾಲಯದಲ್ಲಿ ಪುಸ್ತಕ ವಿಮರ್ಶೆ ಕಾರ್ಯಕ್ರಮವು ನಡೆಯಿತು. ಪ್ರಶಿಕ್ಷಣಾರ್ಥಿಗಳಾದ ಪ್ರಜ್ಞಾ, ಪ್ರಸೀದ, ಜಶ್ಮಿತ, ದೀಕ್ಷಾ, ಅನುಷಾ ಪುಸ್ತಕ ವಿಮರ್ಶೆಯನ್ನು ಮಾಡಿದರು. ಈ ಕಾರ್ಯಕ್ರಮವನ್ನು ಶ್ರೀಹಿತ ನಿರೂಪಿಸಿದರು.  

ಅಂಬೇಡ್ಕರ್ ಜಯಂತಿ ಕಾರ್ಯಕ್ರಮ

ಅಂಬೇಡ್ಕರ್ ಜಯಂತಿ ಕಾರ್ಯಕ್ರಮ

Thursday, April 14th, 2022

ವಿವೇಕಾನಂದ ಶಿಕ್ಷಣ ಮಹಾವಿದ್ಯಾಲಯದಲ್ಲಿ ಅಂಬೇಡ್ಕರ್ ಜಯಂತಿ ಕಾರ್ಯಕ್ರಮ ನಡೆಯಿತು. ಈ ಕಾರ್ಯಕ್ರಮಕ್ಕೆ ಮುಖ್ಯ ಅತಿಥಿ ಪುತ್ತೂರು ನ್ಯಾಯವಾದಿ ಮಹೇಶ್ ಕಜೆ ಆಗಮಿಸಿ ಭವ್ಯ ಭಾರತವನ್ನು ಸೃಷ್ಟಿಸುವುದರಲ್ಲಿ ಶಿಕ್ಷಕರ ಪಾತ್ರ ಬಹುಮುಖ್ಯ. ಉತ್ತಮ ಗುರಿ ಮತ್ತು ಗುರುವಿದ್ದರೆ ಉತ್ತಮ ಸಾಧನೆಯನ್ನು ಮಾಡಬಹುದು ಮತ್ತು ಸಮಾಜದ ಅಂಕುಡೊಂಕುಗಳನ್ನು ತಿದ್ದಬಹುದು. ಶಿಕ್ಷಕರು ಅಂಬೇಡ್ಕರ್ ಅಂತಹ ವ್ಯಕ್ತಿತ್ವದ ಸಾವಿರ ಶಿಲ್ಪಿಗಳನ್ನು ಸೃಷ್ಟಿಸಬೇಕು ಎಂದರು. ಕಾರ್ಯಕ್ರಮದ ಅಧ್ಯಕ್ಷತೆ ಸ್ಥಾನ ವಹಿಸಿದ ವಿವೇಕಾನಂದ ಶಿಕ್ಷಣ ಮಹಾವಿದ್ಯಾಲಯದಲ್ಲಿ ಆಡಳಿತ ಮಂಡಳಿ ಅಧ್ಯಕ್ಷ ಸುಧಾಕರ್ ರೈ, ಅಂಬೇಡ್ಕರ್ ಅವರ […]

ಕರ ಕೌಶಲ್ಯ ತರಬೇತಿ ಕಾರ್ಯಕ್ರಮ

ಕರ ಕೌಶಲ್ಯ ತರಬೇತಿ ಕಾರ್ಯಕ್ರಮ

Wednesday, April 13th, 2022

ವಿವೇಕಾನಂದ ಶಿಕ್ಷಣ ಮಹಾವಿದ್ಯಾಲಯದಲ್ಲಿ ಕರ ಕೌಶಲ್ಯ ತರಬೇತಿ ಕಾರ್ಯಕ್ರಮ ನಡೆಯಿತು. ಈ ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಯಾಗಿ ರೋಹಿಣಿ ರಾಘವಾ ಆಚಾರ್ಯ ಆಗಮಿಸಿ, ದ್ವಿತೀಯ ವರ್ಷದ ಪ್ರಶಿಕ್ಷಣಾರ್ಥಿಗಳಿಗೆ ಕರಕೌಶಲ್ಯ ತರಬೇತಿಯನ್ನು ನೀಡಿದರು.

ನಾಲ್ಕನೇ ರಾಂಕ್ ಪಡೆದ ದಿವ್ಯ ಅವರಿಗೆ ಸನ್ಮಾನ

ನಾಲ್ಕನೇ ರಾಂಕ್ ಪಡೆದ ದಿವ್ಯ ಅವರಿಗೆ ಸನ್ಮಾನ

Tuesday, April 5th, 2022

ವಿವೇಕಾನಂದ ಶಿಕ್ಷಣ ವಿದ್ಯಾಲಯದಲ್ಲಿ ನಾಲ್ಕನೇ ರಾಂಕ್ ಪಡೆದ ದಿವ್ಯರವರನ್ನು ಸನ್ಮಾನಿಸಲಾಯಿತು. ದ್ವಿತೀಯ ವರ್ಷದ ಪ್ರಶಿಕ್ಷಣಾರ್ಥಿಗಳು ಪ್ರಾರ್ಥಿಸಿದರು. ವಿವೇಕಾನಂದ ಶಿಕ್ಷಣ ಮಹಾವಿದ್ಯಾಲಯದ ಪ್ರಾಂಶುಪಾಲರು ಡಾ. ಶೋಭಿತಾ ಸತೀಶ್ ಸ್ವಾಗತಿಸಿ, ಪ್ರಾಧ್ಯಾಪಕಿ ಅನುರಾಧ ವಂದಿಸಿದರು. ದ್ವಿತೀಯ ವರ್ಷದ ಪ್ರಶಿಕ್ಷಣಾರ್ಥಿ ರಕ್ಷಿತ ಕಾರ್ಯಕ್ರಮವನ್ನು ನಿರೂಪಿಸಿದರು.

ಪ್ರಥಮ ವರ್ಷದ ವಿದ್ಯಾರ್ಥಿಗಳಿಗೆ ಸ್ವಾಗತ ಕಾರ್ಯಕ್ರಮ

ಪ್ರಥಮ ವರ್ಷದ ವಿದ್ಯಾರ್ಥಿಗಳಿಗೆ ಸ್ವಾಗತ ಕಾರ್ಯಕ್ರಮ

Friday, April 1st, 2022

ವಿವೇಕಾನಂದ ಶಿಕ್ಷಣ ಮಹಾವಿದ್ಯಾಲಯದಲ್ಲಿ ಪ್ರಥಮ ವರ್ಷದ ವಿದ್ಯಾರ್ಥಿಗಳಿಗೆ ಸ್ವಾಗತ ಕಾರ್ಯಕ್ರಮ ಮತ್ತು 75ನೇ ಸ್ವಾತಂತ್ರ್ಯೋತ್ಸವದ ಅಮೃತ ಮಹೋತ್ಸವ ಕಾರ್ಯಕ್ರಮದ ಉದ್ಘಾಟನೆಯ ನಡೆಯಿತು. ಕಾರ್ಯಕ್ರಮವನ್ನು ಆದರ್ಶ ಗೋಖಲೆ ಅವರು ಉದ್ಘಾಟಿಸಿ, ವಿದ್ಯಾರ್ಥಿಗಳಲ್ಲಿ ರಾಷ್ಟ್ರಪ್ರಜ್ಞೆಯ ಮೂಡಿಸುವಲ್ಲಿ ಶಿಕ್ಷಕರ ಪಾತ್ರ ಬಹುಮುಖ್ಯ. ವಿದ್ಯಾರ್ಥಿಗಳಿಗೆ ಭಾರತ ದೇಶದ ಸಂಸ್ಕೃತಿ, ಇತಿಹಾಸದ ಮತ್ತು ಸ್ವಾತಂತ್ರ್ಯಕ್ಕಾಗಿ ಜೀವವನ್ನೇ ತ್ಯಾಗ ಮಾಡಿದ ವೀರ ವ್ಯಕ್ತಿಗ ಗಳ ಬಗ್ಗೆ ವಿದ್ಯಾರ್ಥಿಗಳಿಗೆ ತಿಳಿಸಿಕೊಡಬೇಕು. ಅವರಲ್ಲಿಯೂ ರಾಷ್ಟ್ರದ ರಕ್ಷಣೆ ನನ್ನ ಕರ್ತವ್ಯ ಎಂಬ ನಿಜವಾದ ರಾಷ್ಟ್ರಪ್ರೇಮ ಮೂಡಬೇಕು ಎಂದರು. ಸ್ವಾತಂತ್ರ್ಯ ಹೋರಾಟಗಾರರ […]

Notification - Academic Calendar 2021-22

Notification – Academic Calendar 2021-22

Monday, March 14th, 2022
ರಾಣಿ ಅಬ್ಬಕ್ಕ ತುಳು ವಸ್ತುಸಂಗ್ರಹಾಲಯಕ್ಕೆ ಭೇಟಿ

ರಾಣಿ ಅಬ್ಬಕ್ಕ ತುಳು ವಸ್ತುಸಂಗ್ರಹಾಲಯಕ್ಕೆ ಭೇಟಿ

Friday, March 11th, 2022

ವಿವೇಕಾನಂದ ಶಿಕ್ಷಣ ಮಹಾವಿದ್ಯಾಲಯದಿಂದ ದ್ವಿತೀಯ ವರುಷದ ಪ್ರಶಿಕ್ಷಣರ್ಥಿಗಳು ರಾಣಿ ಅಬ್ಬಕ್ಕ ತುಳು ವಸ್ತುಸಂಗ್ರಹಾಲಯಕ್ಕೆ ಭೇಟಿ ಕೊಟ್ಟಿದ್ದರು. ಶ್ರೀ ತುಕಾರಾಮ್ ಪೂಜಾರಿ ವಸ್ತುಸ೦‌ಗ್ರಹಾಲಯ ವಿಶೇಷತೆಯ ಬಗ್ಗೆ ಮಾಹಿತಿ ನೀಡಿದರು. ಈ ಸಂದರ್ಭದಲ್ಲಿ ಅವರೊಂದಿಗೆ ಸಂಸ್ಥೆಯ ಪ್ರಾಂಶುಪಾಲ ಡಾ. ಶೋಭಿತ ಸತೀಶ್ ಹಾಗೂ ಸಹ ಪ್ರಾಧ್ಯಾಪಕರಾಗಿರುವ ಶ್ರೀಮತಿ ಭುವನೇಶ್ವರಿ ಇವರು ಉಪಸ್ಥಿತರಿದ್ದರು.